Posts

Showing posts with the label ಕವನಗಳು

ಜೀವನವೆಂಬ ಪಯಣದಲಿ, ನಾವೆಲ್ಲಾ ಒಟ್ಟಿಗೆ ಇದ್ದೀವಿ!

  ಜೀವನವೆಂಬ ಪಯಣದಲಿ, ನಾವೆಲ್ಲಾ ಒಟ್ಟಿಗೆ ಇದ್ದೀವಿ! ಕಲ್ಲುಮುಳ್ಳಿನ ದಾರಿಯಲಿ ಪಯಣ ಕಷ್ಟವೆನಿಸುತ್ತಿದೆಯಾ? ನಿನ್ನ ಭಾರವನು ಹಂಚಿಕೊಳ್ಳಲು ನಾವೆಲ್ಲಾ ಸಿದ್ಧರಾಗಿದ್ದೀವಿ ದಾರಿಯಲಿ ಜಾರಿ ಕೆಳಗೆ ಬಿದ್ದಿರುವೆಯಾ? ಕೈ ಚಾಚಿ ಮೇಲೆತ್ತಲು ನಾವೆಲ್ಲಾ ಕಾಯುತ್ತಿದ್ದೇವೆ ಸಾಧನೆಯ ಶಿಖರವನ್ನೇರಿದರೂ, ಶೂನ್ಯಭಾವ ಕಾಡುತ್ತಿದೆಯಾ? ನಿನ್ನ ಸಾಧನೆಯ ಸಂಭ್ರಮಿಸಲು ನಾವೆಲ್ಲಾ ಉತ್ಸುಕರಾಗಿದ್ದೇವೆ ಎಲ್ಲರೊಟ್ಟಿಗಿದ್ದರೂ ಏಕಾಂತ ಕಾಡುತ್ತಿದೆಯಾ? ಏಕಾಂತದ ಬಂಧನದಿಂದ ಬಿಡಿಸಿ, ನಿನ್ನ ಅಪ್ಪಿಕೊಳ್ಳಲು ಹಾತೊರೆಯುತ್ತಿದ್ದೀವಿ ಯಾವುದೇ ಸಂಧರ್ಭದಲ್ಲಿಯೂ ನೀ ಮರೆಯಬೇಡ ಜೀವನವೆಂಬ ಪಯಣದಲಿ ನಾವೆಲ್ಲಾ ಒಟ್ಟಿಗೆ ಇದ್ದೀವಿ ! -LSS

ನನ್ನ ಪ್ರೀತಿಯ ಜೀವ ನೀನು

ನಿನ್ನ ಹೃದಯ ಬಡಿತ ಕೇಳಬಲ್ಲೆ ನಾನು  ನಿನ್ನ ಚಲನವಲನ ತಿಳಿಯಬಲ್ಲೆ ನಾನು  ನನ್ನ ಬದುಕನ್ನು ಬದಲಾಯಿಸಲು   ಹೊಸ ಅರ್ಥವ ಕೊಡಲು, ಬರುತ್ತಿರುವೆ ನೀನು  ನನ್ನ ಭವಿಷ್ಯದ ಭಾಗವಾಗಿರುವೆ ನೀನು  ಪ್ರತಿ ಆಲೋಚನೆಯ ಬಿಂದುವಾಗಿರುವೆ ನೀನು  ಏನೇನು ಸತ್ವಗಳು ಬೇಕೋ ಹೀರಿಕೋ  ನೀನು  ನನ್ನ ದೇಹದ ಕಣ ಕಣದ ಹಕ್ಕುದಾರ ನೀನು  ನಾ ಮರವಾದರೆ, ಆಸರೆಯಲ್ಲಿ ಬೆಳೆಯುವ ಸಣ್ಣ ಸಸಿ ನೀನು  ನನ್ನೆಲ್ಲ ಒಳ್ಳೆ ಅಂಶಗಳ ಪಡೆದು, ಹೆಮ್ಮರವಾಗು ನೀನು  ಪೋಷಿಸುವೆ, ಕಾಪಾಡುವೆ ಪ್ರಾಣವಾದರೂ ನೀಡಿ ನಾನು  ಎಲ್ಲ ನೋವುಗಳು, ಎಲ್ಲ ಅಸ್ವಸ್ಥತೆಗಳ ಸಹಿಸಿಕೊಳ್ಳುವೆ ನಾನು  ಯಾರನ್ನು ದ್ವೇಷಿಸಬೇಕಿಲ್ಲ, ಯಾರಿಗೂ ಹೆದರಬೇಕಿಲ್ಲ ನೀನು  ನಿನಗಾಗಿ ಪ್ರೀತಿ ತುಂಬಿದ ಜಗತ್ತನ್ನು ಸೃಷ್ಟಿಸುವೆವು ನಾವು   ಹೊಸ ಜೀವವ ಸೃಷ್ಟಿಸುವ ಸಾಮರ್ಥ್ಯ ಕೊಟ್ಟಿರುವೆ ನೀನು  ಬದುಕಿನುದ್ದಕ್ಕೂ ಹೆಮ್ಮೆ ಪಡುವಂತಹ ಅವಕಾಶ ಕೊಟ್ಟಿರುವೆ ನೀನು ಆರೋಗ್ಯವಾಗಿ, ಸಂತೋಷವಾಗಿ ಬೆಳವಣಿಗೆ ಹೊಂದು ನೀನು  ನಿನ್ನ ಭೇಟಿಯಾಗಲು ಕಾಯುತ್ತಿರುವೆ, ನನ್ನ ಪ್ರೀತಿಯ ಜೀವ ನೀನು                             ...

ಒಂದು ಹಣ್ಣಿನ / ಹೆಣ್ಣಿನ ಕಥೆ !

ಸಿರಿವಂತನ ಮಗನ ಹಸಿವನ್ನು ನೀಗಿಸಿ  ಉದರಾಗ್ನಿಯನ್ನು ಶಾಂತವಾಗಿಸಿತ್ತು ಆ  ಹಣ್ಣು/ಹೆಣ್ಣು   ತನ್ನ ಹಸಿವು ನೀಗಿದ  ನಂತರ, ಅರ್ಧ ತಿಂದು ಮುಗಿಸಿದ ನಂತರ  ರಸ್ತೆ ಬದಿಯಲ್ಲಿ ಬಿಸಾಡಿ ಹೊರಟ ಅವನು  ಆ ಹಣ್ಣಿನ / ಹೆಣ್ಣಿನ ಒಡಲಲ್ಲಿತ್ತು ಪ್ರಪಂಚ ಕಾಣದ ಬೀಜ ಒಂದು  ಹೊಸಕಿ ಹಾಕಲೇ ,ಬದುಕು ನೀಡಲೇ ಎಂಬ ಗೊಂದಲದಲ್ಲಿ ಜೀವ ಬಲಿತಾಗಿತ್ತು  ಪ್ರಪ್ರಂಚವ ಕಾಣದ ಮುಗ್ಧ ಜೀವವನ್ನು ನೆನೆದು ,   ಹೊಸ ಭವಿಷ್ಯವ ಹೊತ್ತ ಬದುಕನ್ನು ಸಾಯಿಸಲು ಮನಸ್ಸಾಗಲಿಲ್ಲ  ಜೀವದ ಧ್ಯೇಯವೆಂಬಂತೆ , ಉಸಿರನ್ನು ಬಸಿದು  ಫಲವತ್ತಾದ ಭೂಮಿಯನ್ನು ಕಂಡುಕೊಂಡಳು  ನೆರೆಹೊರೆಯವರಿಗೆ ಹೆದರಲಿಲ್ಲ , ಬಿರುಗಾಳಿಗೆ ಬೆದರಲಿಲ್ಲ  ಧೃಡ ಮನಸ್ಸಿನಿಂದ ಬೇರುಗಳ ಆಳಕ್ಕೆ ಚಾಚುತ್ತಾ ಪ್ರಪಂಚವ ತಿಳಿದಳು  ತುಂತುರು ಮಳೆಯಿಂದ , ಸೂರ್ಯನ ಶಾಖದಿಂದ  ಹಣ್ಣಿನ / ಹೆಣ್ಣಿನ ಧೃಡತೆಯಿಂದ ,ಕೊನೆಗೊಂದು ದಿನ ಜೀವ ಟಿಸಿಲೊಡೆದಿತ್ತು  ನಿಷ್ಕಲ್ಮಶ ಬುದ್ದಿಯ , ಮುಗ್ಧ ಮನಸ್ಸಿನ  ಹೊಸ ಜೀವವೊಂದು ಪ್ರಪಂಚದಲ್ಲಿ ಹುಟ್ಟಿತ್ತು                                      ...

ನಾ ಮರಳಬಹುದು....!!

ನಾ ಮರಳಬಹುದು ಮತ್ತೆ ನನ್ನ ಗೂಡಿಗೆ ಬೆಚ್ಚಗಿನ ಪರಿಸರಕ್ಕೆ,ನಿರಾತಂಕ ಬದುಕಿಗೆ  ಸಾಮಾನ್ಯ ,ಸ್ವ ಇಚ್ಛೆಯ ಬದುಕಿಗೆ ಏರಿಳಿತಗಳಿಲ್ಲದ ಸಮಸ್ಥಿತಿಗೆ ನಾ ಮರಳಬಹುದು ಮತ್ತೆ ಭೂಮಿಯ ಹಂತಕ್ಕೆ ಸೋಲಬಹುದು ಗುರುತ್ವಾಕರ್ಷಣೆಯ ಸೆಳೆತಕ್ಕೆ ನೆಲದ ತೇವವ ಹೀರುತ್ತಾ ಬೇರುಗಳ ಚಾಚಬಹುದು ಪಾತಾಳಕ್ಕೆ  ನೆಮ್ಮದಿಯಿಂದ ತುಂಬಿರುವ ಪ್ರಪಂಚಕ್ಕೆ ಸೂರ್ಯನ ಕಿರಣಗಳ ಎದುರಿಸುತ್ತಾ ಗಾಳಿ ಮಳೆಯ ತೀವ್ರತೆಯ ಧಿಕ್ಕರಿಸುತ್ತಾ ನನ್ನೆಲ್ಲಾ ಶಕ್ತಿಯ ಮೀರಿ ಬಾನಂಗಳದಿ ಮೇಲೇರುತ್ತಾ ಸ್ವತಂತ್ರವಾಗಿ ಹಾರಾಡಲು ಬಯಸುತ್ತೇನೆ ಬೇರುಗಳಿಂದ ಹೀರಿರುವ ಸತ್ವಗಳನ್ನು ಬಳಸುತ್ತಾ ಎಲ್ಲಾ  ಅಡೆತಡೆಗಳನ್ನು ಎದುರಿಸುತ್ತಾ ಅಚಲವಾದ ತಾಳ್ಮೆಯಿಂದ ಶ್ರಮವಹಿಸುತ್ತಾ ಬಾನೆತ್ತರಕ್ಕೆ ಬೆಳೆಯಲು ನಾ ಬಯಸುತ್ತೇನೆ ಬೇಕಿದ್ದನ್ನು ಸಾಧಿಸಿದಮೇಲೆ ಪ್ರಪಂಚವನ್ನು ತಿಳಿದಮೇಲೆ ಮರಳುವೆ ಬೆಚ್ಚನೆಯ ಗೂಡಿಗೆ ನೆಮ್ಮದಿಯಿಂದ ಶರಣಾಗುವೆ ಭೂಮಿಗೆ                                                                                             ...

ಇಷ್ಟು ಸಾಕು !!!

ನಟ,ನಟಿಯರಿಗೆ ಅನಿವಾರ್ಯ ನಾಟಕೀಯ ಬದುಕು ಮನಸ್ಸಿನ ಭಾವನೆಯ ಮನಸಲ್ಲೇ ನುಂಗಿ ನಗುವ ಬದುಕು ರಾಜಕಾರಣಿಗಳಿಗೆ ಅನಿವಾರ್ಯ  ಮುಖವಾಡ ಧರಿಸುವ ಬದುಕು ಭಾವನೆಗಳ ಬದಿಗಿಟ್ಟು ಅಧಿಕಾರಕ್ಕೆ ಹಾತೊರೆಯುವ ಬದುಕು ವ್ಯಾಪಾರಿಗಳಿಗೆ ಅನಿವಾರ್ಯ ವ್ಯಾವಹಾರಿಕ ಬದುಕು ಸುಖ ದುಃಖ ಗಳ ಹಣದ ರೂಪದಲಿ ಕೂಡಿಟ್ಟು ವ್ಯವಹರಿಸುವ ಬದುಕು ನಾ ಕವಯಿತ್ರಿ ,ನನ್ನದು ಯಾವುದಕ್ಕೂ ಅನಿವಾರ್ಯ ವಿಲ್ಲದ ಬದುಕು ಸುಖ ದುಃಖ ಹಂಚಿಕೊಳ್ಳಲು ಲೇಖನಿ ಹಾತೊರೆಯುತ್ತಿರಲು ಇನ್ನೇನು ಬೇಕು ಭಾವನೆಗಳ ಬಿಂಬಿಸಲು ಪದಗಳು ಕಾತುರದಿಂದ ಕಾಯುತ್ತಿರಲು ಇನ್ನೇನು ಬೇಕು ಮನದ ಇಂಗಿತವ ಕೇಳಲು ಕಾಗದ ಕಿವಿ ನಿಮಿರಿ ನಿಂತಿರಲು ಇನ್ನೇನು ಬೇಕು ಸಂತಸವ ಸಂಭ್ರಮಿಸಲು ಕಾವ್ಯಾಸಕ್ತರು ಇದ್ದಾರೆ , ಈ ಬದುಕಿಗೆ ಇಷ್ಟು ಸಾಕು !!!                                                                                                                        -LSS 

ಬದುಕು.... !

ಕೋಣೆಯ ಬಾಗಿಲನು ಭದ್ರ ಮಾಡಿ  ತನ್ನ ತಾನು ಅಡಗಿಸಿಡುವುದು ಬದುಕಲ್ಲ  ಮನಸ್ಸಿನ ಬಾಗಿಲನು ಭದ್ರ ಮಾಡಿ  ಸಲ್ಲದವರನು ಸೇರಿಸದಿರುವುದು ಬದುಕು  ನಮ್ಮ ಭಾವನೆಗಳ ಬೇರೆಯವರ ಕಾಲಡಿಗೆ ಹಾಕಿ  ತುಳಿಯದಂತೆ ಬೇಡುವುದು ಬದುಕಲ್ಲ  ಭಾವನೆಗಳ ಗುಚ್ಛಮಾಡಿ ಯಾರಿಗೂ ಸಿಗದಂತೆ  ಯಾರೂ ಕೆಡವದಂತೆ ನೋಡಿಕೊಳ್ಳುವುದು ಬದುಕು  ಕಂಡ ಕಂಡವರ ಮಾತನು ಮನಸಿನಾಳಕೆ ಬಿಟ್ಟು  ತನ್ನ ತನವ ಮರೆತು ಕೊರಗುವುದು ಬದುಕಲ್ಲ  ತನ್ನ ತಾನು ಅರಿಯುತ್ತಾ ಪ್ರೀತಿಸುತ್ತಾ  ಶಾಂತವಾದ ಮೌನಕ್ಕೆ ಶರಣಾಗುವುದು ಬದುಕು                                                                                  -LSS  

ಒಟ್ಟಿಗೆ ಸಾಗೋಣ .... !!

ಆಗಸವು ಶತಮಾನಗಳಿಂದ ಬಗ್ಗಿ ನೋಡುತ್ತಾ  ಏನನ್ನೋ  ಹುಡುಕುತ್ತಿದೆ ಅನಾಥಾಶ್ರಮದ ಮಗುವೊಂದು ವರ್ಷಗಳಿಂದ ತನ್ನವರನ್ನು ಹುಡುಕುತ್ತಿರುವಂತೆ  ಸಮುದ್ರ ,ತನ್ನ ಅಲೆಗಳನ್ನು ಕಳುಹಿಸುತ್ತಾ ಕಂಡಕಂಡವರ  ಕಾಲ್ತೊಳೆಯುತ್ತಾ ಯಾರಿಗೋ  ಕಾಯುತ್ತಿದೆ  ವೃದ್ಧಾಶ್ರಮದ ಹಿರಿಯ ಜೀವ ,ಪತ್ರಗಳನ್ನು ಕಳುಹಿಸುತ್ತಾ  ತನ್ನವರಿಗಾಗಿ ಕಾಯುತ್ತಿರುವಂತೆ  ದಟ್ಟ ಕಾನನದ ಹಸಿರು ಮರಗಳು ಬಾನತ್ತ ಕೈ ಚಾಚಿ ಯಾರಿಗಾಗಿಯೋ ಹಾತೊರೆಯುತ್ತಿದೆ  ಸಣ್ಣ ಜಗಳಕ್ಕೆ ಮುರಿದ ಸಂಬಧವ ನೆನೆದು ಆಲಿಂಗನಕ್ಕೆ  ಯುವತಿ ಹಾತೊರೆಯುತ್ತಿರುವಂತೆ  ಶಾಂತವಾದ ನದಿಯು ಯಾವುದೋ ಉದ್ವೇಗಕ್ಕೆ ಒಳಗಾಗಿ  ಜಲಪಾತದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ  ಹತಾಶೆ ಸೋಲುಗಳಿಂದ ಉದ್ವೇಗಕ್ಕೆ ಒಳಗಾಗಿ  ಬಲಿಯಾಗುತ್ತಿರುವ ಯುವ ಸಮುದಾಯದಂತೆ  ಪ್ರಕೃತಿಯ ಸಂತೈಸಲು ಸಾಧ್ಯವಿಲ್ಲ , ಸಮಾಧಾನಿಸಲು ಶಕ್ಯರಲ್ಲ  ಪ್ರೀತಿ ತೋರಿಸಿ ಪ್ರಕೃತಿಯ ಬದಲಾಯಿಸಲು ಸಾಧ್ಯವಿಲ್ಲ  ಮನುಷ್ಯರನ್ನು ಸಂತೈಸಲು ಸಾಧ್ಯವಿದೆ , ಸಮಾಧಾನಿಸಲು ಅವಕಾಶವಿದೆ   ಪ್ರೀತಿತೋರಿಸಿ ಮನಸ್ಸನ್ನು ಬದಲಾಯಿಸುವುದು ಸಾಧ್ಯವಿದೆ ಪ್ರೀತಿಸೋಣ ,ಆಲಂಗಿಸೋಣ ,ದುಃಖದಲ್ಲಿರುವವರಿಗೆ ಅಕ್ಕರೆ ತೋರುತ್ತಾ  ಸುಂದರ ಜೀವನದೆಡೆಗೆ ಎಲ್ಲರೂ ಒಟ್ಟಿಗೆ ಸಾ...

ಈ ಹೊತ್ತಿನ ತಲ್ಲಣ

ವಿದ್ಯುತ್ಕಾಂತೀಯ ಸಂಕೋಲೆಗಳಿಂದ ಬಿಡಿಸಿಕೊಳ್ಳಲಾಗದೆ ಕೊರಗುತ್ತಿದ್ದೇವೆ   ಕ್ಷಣಕ್ಷಣಕ್ಕೂ   ಜೀವನದ   ಸೌಂದರ್ಯ ಮರೆತು ಬರಡು ಬಾಳು ಬದುಕುತ್ತಿದ್ದೇವೆ   ನಮ್ಮೆಲ್ಲಾ ಮೌಲ್ಯಗಳನ್ನು , ಮನುಷ್ಯತ್ವವನ್ನು ಮರೆತು ಯಂತ್ರಗಳಾಗುತ್ತಿದ್ದೇವೆ   ತರಂಗಾಂತರಗಳ ಕಿರಣಗಳನ್ನು ನೋಡುತ್ತಾ ಇದೇ ಈ ಹೊತ್ತಿನ ತಲ್ಲಣ ಎಂದು ನಿಂತಿದ್ದೇವೆ   ಹಸಿದ ಮಗುವಿಗೆ ಊಟ ನೀಡಲು   ತಾಯಿಗೆ ಸಮಯವಿಲ್ಲ   ವಯಸ್ಸು ಮೀರಿದ ಮನಸ್ಸುಗಳನ್ನು ಮಾತನಾಡಿಸಲು ಪುರುಸೊತ್ತಿಲ್ಲ   ಊರು ಕೇರಿಯವರ ಪರಿಚಯವಿಲ್ಲ , ಪ್ರಾಣಿ ಪಕ್ಷಿಗಳಂತೂ ನೆನಪೇ ಇಲ್ಲ   ಅಸ್ವಾಭಾವಿಕ ಸಮಾಜ ದ   ಮಧ್ಯೆ ತಲ್ಲಣಿಸುತ್ತಿರುವವನಿಗೆ ಜೀವನದ ಕುರುಹೇ ಇಲ್ಲ   ದೇವಸ್ಥಾನಕ್ಕೆ   ಹೋಗುವುದು " ಸೆಲ್ಫಿ " ಗಾಗಿ , ದರುಶನಕ್ಕಲ್ಲ   ಊಟ ಮಾಡುವುದು ಫೇಸ್ ಬುಕ್ ಗಾಗಿ , ಹೂಟ್ಟೆಪಾಡಿಗಲ್ಲ   ಸಾಧನೆ  , ಬೇರೆಯವರ ತೋರಿಕೆಗಾಗಿ ಆತ್ಮ ತೃಪ್ತಿಗಲ್ಲ   ಒಂದಲ್ಲ ಒಂದು ದಿನ ವಿದ್ಯುತ್ ಇರದಿದ್ದರೆ ? ಎಂಬ ತಲ್ಲಣ ಕಾಡುತ್ತಿದೆಯಲ್ಲ   ಕೈಯಲ್ಲಿ ದೂರವಾಣಿ , ಸ್ವಲ್ಪ ದೂರದಲ್ಲೇ ಗಣಕಯಂತ್ರವೊಂದು   ತೊಡೆಯಮೇಲೊಂದು , ಅಲ್ಲೇ ಬೆಂಚಿನ ಮೇಲೆ ಮತ್ತೊಂದು   ಕತ್ತಿನ ಸುತ್ತ ಹಾಡುವ ಯ...

ಕಂಪನಿಯ ಕಥೆ... !

ಎರಡು ತಾಸಿನಿಂದ ಒಂದೇ ರಸ್ತೆ ಯಲ್ಲಿ ಪ್ರಯಾಣ ಸಾಗಿತ್ತು ಬಿಡಿಸಿಕೊಂಡು ಹೋಗುವ ಹಾಗಿರಲಿಲ್ಲ , ಅಲ್ಲೇ ಕೂರಲು ಮನಸ್ಸಾಗುತ್ತಿಲ್ಲ  ಮುಂದೆ , ಹಿಂದೆ ಅಕ್ಕ ಪಕ್ಕ ಎಲ್ಲೆಲ್ಲೂ ಮೈ ಗೆ ಮೈ ತಾಗಿಸಿ ವಾಹನಗಳು ನಿಂತಿತ್ತು  ಹವಾನಿಯಂತ್ರಿತ ವಾಹನವಾದರೂ , ವಿಚಿತ್ರ ಹಿಂಸೆ ಆಗುತ್ತಿತ್ತು  ಆಡಿದ್ದೇ ಮಾತುಗಳು ಮತ್ತೆ ಮತ್ತೆ , ಕೇಳಿದ್ದೇ ಹಾಡುಗಳು ಮತ್ತೆ ಮತ್ತೆ ಬರುತ್ತಿತ್ತು  ಹೊರಗಿನ ಗಾಳಿ ಒಳ ಬರಲು ಸಾಧ್ಯವಿಲ್ಲ , ಒಳಗಿನ ಗಾಳಿ ಹೊರ ಹೋಗುವುದಿಲ್ಲ  ಅವರವರ ಉಸಿರು ಅವರಿಗೇ ಮತ್ತೆ ಮತ್ತೆ ಹಂಚಿಕೆಯಾಗುತ್ತಿತ್ತು  ಒಂದು ದಿನದ  ಕಥೆಯಲ್ಲ , ಪ್ರತಿ ದಿನದ , ಪ್ರಯಾಣದ ವ್ಯಥೆಯಾಗಿತ್ತು  ಉಳಿತಾಯ ಖಾತೆಯಲ್ಲಿ ಹಣ ತುಂಬಿದ್ದರೂ, ಕಿಂಚಿತ್ತು ಸಂತಸವಿರಲಿಲ್ಲ  ಜೀವನದಲ್ಲಿ ಜಿಗುಪ್ಸೆ , ಸಾಕಾಯ್ತು ಬದುಕು ಎನ್ನುತ್ತಾ ಕುಡಿಯಲು ಕುಳಿತ ಕೋಟ್ಯಾಧೀಶನೊಬ್ಬ  ಮೇಲಧಿಕಾರಿಯ ಜೊತೆಯಲ್ಲಿ ಕುಡಿದರೆ ತನಗೆ ಲಾಭವಾದೀತೆಂದು , ಕುಡಿಯಲು ಕುಳಿತ ಅಮಾಯಕ ಹೊಸಬ  ಬಡ್ತಿಯ ಕನಸು , ಸಂಬಳದ ಆಸೆಯಿಂದ ಸುಮ್ಮನೆ ನಗುತ್ತಾ ನಿಂತಿದ್ದ ಹಳ್ಳಿಯ ಹುಡುಗಿ  ಕೆಲವರ ಬದುಕು ಬದಲಾಗುತ್ತಿತ್ತು , ಕೆಲವರ ಬದುಕು ಹಾಳಾಗುತ್ತಿತ್ತು  ಸಾಲಗಳು ತೀರುತ್ತಿತ್ತು , ತಂಗಿಯ ಮದುವೆ, ತಂದೆಯ ಜವಾಬ್ದಾರಿ  ಸ್ವಂತದ ಮನೆ , ಹೀಗೆ ಕನಸುಗಳು ನನಸಾಗ...

ಸೂರ್ಯ ಸಾಮ್ರಾಜ್ಯ

ಅಪರಾಹ್ನದ ಸೂರ್ಯ ನೆತ್ತಿ ಮೇಲಿತ್ತು ಬಿಸಿಲಿನ ಶಾಖ ಬಿರುಸಾಗಿ ಪ್ರಖರವಾಗಿತ್ತು ಜೀವರಸವನ್ನು ಹೀರಿ , ಜೀವಜಲವನ್ನು ಬರಡು ಮಾಡಿತ್ತು  ಜನಸಾಮಾನ್ಯರು ಬಳಲಿ , ನರಳುವಂತೆ ಮಾಡುತ್ತಿತ್ತು ಧರೆಯ ಮೇಲೆ ಹೊಗೆಯಾಡುತ್ತಿತ್ತು ಬಿಸಿ ಗಾಳಿಯು , ಸಿಕ್ಕ ಸಿಕ್ಕವರನ್ನು ಸುಡುತ್ತಿತ್ತು ಆಗ ತಾನೇ ಚಿಗುರಿದ ಎಲೆಗಳು ಸುಟ್ಟು ಹೋಗುತ್ತಿತ್ತು ಯಾರ ಮೇಲೂ ಕರುಣೆ ತೋರದೆ ಸೂರ್ಯ ಸಾಮ್ರಾಜ್ಯ ರಾರಾಜಿಸುತ್ತಿತ್ತು ಆ ಊರಿನಲ್ಲಿ ಇಂತಹ  ಬರಗಾಲ ಆವರಿಸಿತ್ತು ನೀರಿಗಾಗಿ ಹೊಡೆದಾಟ , ನೆರಳಿಗಾಗಿ ಪರದಾಟ ಯಾರೂ ಯಾರಿಗೂ ಸಹಾಯ ಮಾಡುತ್ತಿರಲಿಲ್ಲ ಒಗ್ಗಟ್ಟು ಕರಗಿ, ಎಲ್ಲೆಡೆ ಹಗೆಯ ಬೇಗೆ ಹರಡುತ್ತಿತ್ತು ಅಂದು ಕೂಡ ಬಿರುಬಿಸಿಲು ದಾಳಿಯನು ಮುಂದುವರೆಸಿತ್ತು ಅಕಸ್ಮಾತ್ತಾಗಿ ಏನೊ ಸುಟ್ಟು ಸ್ಪೋಟವಾದಂತೆ ಸದ್ದಾಯಿತು ಊರಿನ ಜನ ಹೊರಬಂದು ನೋಡಿದರೆ , ಜೋರಾಗಿ ಗುಡುಗುತ್ತಿತ್ತು ಮಿಂಚುಗಳ ಬಾಣ ಭೂಮಿಯತ್ತ ಬರುತ್ತಿತ್ತು ,ಮಳೆಯ ಹನಿಗಳು ಊರನ್ನು ಆವರಿಸಿತ್ತು ಮನೆಯ ಜನರೆಲ್ಲಾ ರಸ್ತೆಗೆ ಇಳಿದು , ಒಟ್ಟಾಗಿ ಕುಣಿದು ಸಂಭ್ರಮಿಸಿದರು ಬರಗಾಲ ನೀಗಲಿಲ್ಲ , ಬಾಯಾರಿಕೆ ನೀಗಿತ್ತು ಮಳೆಗಾಲ ಬರಲಿಲ್ಲ , ಧರೆ ಸ್ವಲ್ಪ ತಂಪಾಗಿತ್ತು ಊರಿಗೆ ಊರೇ , ಅಂದು ರಾತ್ರಿ ನೆಮ್ಮದಿಯ ನಿದ್ರೆ ಮಾಡಿತ್ತು .                         ...

ಆಟ!!!

ಆತ ಸಿರಿವಂತನ ಮಗ, ಉದ್ಯಾನ ದಲ್ಲಿ  ಮೊಬೈಲ್ ನಲ್ಲಿ ಆಟವಾಡುತ್ತ ಕುಳಿತ ಈತ ಪೇಪರ್ ಆಯುವ ಹುಡುಗ, ಆತನ ಬಳಿಗೆ  ಬಂದು ಕುಳಿತ  ಬಣ್ಣ ಬಣ್ಣದ ಚಿತ್ತಾರ  ಆಕರ್ಷಕ ವಿನ್ಯಾಸ  ಪೂರ್ತಿಯಾಗಿ ಸೆಳೆಯುವoತ  ಅದ್ಭುತ ಆಟವನ್ನು "ಅವ" ಆಡುತ್ತಿದ್ದ ಕುತೂಹಲ , ಉತ್ಸುಕತೆ ಹೆಚ್ಚಾಗಿ  "ಇವ" ಕೇಳಿದ , ಏನು ನೀ ಆಟವಾಡುತ್ತಿರುವುದು ಎಂದು  "ಅವ" ಹೇಳಿದ,ನಿನಗೇನೂ ಅರ್ಥ ಆಗುವುದಿಲ್ಲ  ಸರಿ ಆಚೆಗೆ , ಆಡಲು ಬಿಡು ನನ್ನ ಪಾಡಿಗೆ ಎಂದು "ಅವ" ಹೇಳಲಿಲ್ಲ, "ಇವ" ಬಿಡಲಿಲ್ಲ ,  "ಅವ" ತೋರಿಸಲಿಲ್ಲ , "ಇವ" ಅಲ್ಲಿಂದ ಕದಲಲಿಲ್ಲ "ಇವ"ನ ಆಸ್ಥೆಯ ನೋಡಿ, "ಅವ"ನಿಗೆ ಮನ ಕರಗಿ  ತನ್ನ ಆಟ ತೋರಿಸುತ್ತ ಹೀಗೆ ಹೇಳಿದ ಈ ಆಟದಲ್ಲಿ , ನಾ ಓಡುತ್ತಾ ಇರುತ್ತೇನೆ , ರಸ್ತೆಯಲ್ಲಿ ಸಿಗುವ ನಾಣ್ಯಗಳನ್ನು ಆಯುತ್ತೇನೆ , ದಾರಿಯಲಿ ಬರುವ ವಾಹನಗಳಿಂದ ತಪ್ಪಿಸಿಕೊಳ್ಳುತ್ತೇನೆ , ಹೆಚ್ಚು ನಾಣ್ಯ ಸಿಕ್ಕರೆ ಹೆಚ್ಚು ಊಟ ಸಿಗುತ್ತದೆ . ಇಷ್ಟೇ ಈ ಆಟ ! ಅದನ್ನು ಕೇಳಿ "ಇವ"ನೆಂದ, ಅರೇ , ನಾನು ಪ್ರತಿ ದಿನ ಇದೇ ಮಾಡುತ್ತೇನೆ , ರಸ್ತೆಯಲಿ ಸಿಗುವ ಪೇಪರ್ ಆಯುತ್ತೇನೆ  ದಾರಿಯಲಿ ಬರುವ ವಾಹನಗಳಿಂದ ತಪ್ಪಿಸಿಕೊಳ್ಳುತ್ತೇನೆ ಹೆಚ್ಚು  ನಾಣ್ಯ ಸಿಕ್ಕರೆ ಹೆಚ್ಚು ಊಟ ಸಿಗುತ್ತದೆ, ಅವನಿಗೂ ಇವನಿಗೂ  ಒಂದೇ ಒಂದು ವ್ಯತ್ಯಾಸವೆಂದರ...