ಈ ಹೊತ್ತಿನ ತಲ್ಲಣ
ವಿದ್ಯುತ್ಕಾಂತೀಯ ಸಂಕೋಲೆಗಳಿಂದ ಬಿಡಿಸಿಕೊಳ್ಳಲಾಗದೆ ಕೊರಗುತ್ತಿದ್ದೇವೆ
ಕ್ಷಣಕ್ಷಣಕ್ಕೂ ಜೀವನದ ಸೌಂದರ್ಯ ಮರೆತು ಬರಡು ಬಾಳು ಬದುಕುತ್ತಿದ್ದೇವೆ
ನಮ್ಮೆಲ್ಲಾ ಮೌಲ್ಯಗಳನ್ನು,ಮನುಷ್ಯತ್ವವನ್ನು ಮರೆತು ಯಂತ್ರಗಳಾಗುತ್ತಿದ್ದೇವೆ
ತರಂಗಾಂತರಗಳ ಕಿರಣಗಳನ್ನು ನೋಡುತ್ತಾ ಇದೇ ಈ ಹೊತ್ತಿನ ತಲ್ಲಣ ಎಂದು ನಿಂತಿದ್ದೇವೆ
ಹಸಿದ ಮಗುವಿಗೆ ಊಟ ನೀಡಲು ತಾಯಿಗೆ ಸಮಯವಿಲ್ಲ
ವಯಸ್ಸು ಮೀರಿದ ಮನಸ್ಸುಗಳನ್ನು ಮಾತನಾಡಿಸಲು ಪುರುಸೊತ್ತಿಲ್ಲ
ಊರು ಕೇರಿಯವರ ಪರಿಚಯವಿಲ್ಲ , ಪ್ರಾಣಿ ಪಕ್ಷಿಗಳಂತೂ ನೆನಪೇ ಇಲ್ಲ
ಅಸ್ವಾಭಾವಿಕ ಸಮಾಜದ ಮಧ್ಯೆ ತಲ್ಲಣಿಸುತ್ತಿರುವವನಿಗೆ ಜೀವನದ ಕುರುಹೇ ಇಲ್ಲ
ದೇವಸ್ಥಾನಕ್ಕೆ ಹೋಗುವುದು "ಸೆಲ್ಫಿ" ಗಾಗಿ , ದರುಶನಕ್ಕಲ್ಲ
ಊಟ ಮಾಡುವುದು ಫೇಸ್ ಬುಕ್ ಗಾಗಿ , ಹೂಟ್ಟೆಪಾಡಿಗಲ್ಲ
ಸಾಧನೆ ,ಬೇರೆಯವರ ತೋರಿಕೆಗಾಗಿ ಆತ್ಮ ತೃಪ್ತಿಗಲ್ಲ
ಒಂದಲ್ಲ ಒಂದು ದಿನ ವಿದ್ಯುತ್ ಇರದಿದ್ದರೆ ? ಎಂಬ ತಲ್ಲಣ ಕಾಡುತ್ತಿದೆಯಲ್ಲ
ಕೈಯಲ್ಲಿ ದೂರವಾಣಿ , ಸ್ವಲ್ಪ ದೂರದಲ್ಲೇ ಗಣಕಯಂತ್ರವೊಂದು
ತೊಡೆಯಮೇಲೊಂದು , ಅಲ್ಲೇ ಬೆಂಚಿನ ಮೇಲೆ ಮತ್ತೊಂದು
ಕತ್ತಿನ ಸುತ್ತ ಹಾಡುವ ಯಂತ್ರ , ಕೈಯಲ್ಲಿ ಹೃದಯ ಬಡಿತ ತೋರಿಸುವ ಯಂತ್ರವೊಂದು
ನಮ್ಮ ಹೆಜ್ಜೆ ಹೆಜ್ಜೆಯನು ಯಾರೋ ದಾಖಲಿಸುತ್ತಿದ್ದಾರೆ ಎಂಬ ತಲ್ಲಣ ಮನದಲ್ಲಿಂದು
ಹಿಂದೊಮ್ಮೆ ಅಂದುಕೊಂಡಿದ್ದೆವು , ದೇವರಿದ್ದಾನೆ ಕಾಯುವವನು ಅವನೇ,
ನಿಯಂತ್ರಿಸುವವನು ಅವನೇ , ನಮ್ಮೆಲ್ಲ ಆಗುಹೋಗುಗಳ ಗಮನಿಸುವವನು ಅವನೇ
ಇಂದೀಗ ತಲ್ಲಣವಾಗುತ್ತಿದೆ ,ದೊಡ್ಡ ಕಂಪನಿಯ ಸಾಹುಕಾರರಿದ್ದಾರೆ
ಕಾಯುವವರು,ನಿಯಂತ್ರಿಸುವವರು ಅವರೇ ,ಆಗುಹೋಗುಗಳ ಗಮನಿಸುವವರು ಅವರೇ
ಒಂದು ದಿನ ಬರಬಹುದು , ಬೆಳಗೆದ್ದು ನೋಡಿದರೆ ಮರ ಗಿಡಗಳಿಲ್ಲ ,ಪ್ರಾಣಿ ಪಕ್ಷಿಗಳಿಲ್ಲ
ಕ್ಷಣಕ್ಷಣಕ್ಕೂ ಜೀವನದ ಸೌಂದರ್ಯ ಮರೆತು ಬರಡು ಬಾಳು ಬದುಕುತ್ತಿದ್ದೇವೆ
ನಮ್ಮೆಲ್ಲಾ ಮೌಲ್ಯಗಳನ್ನು,ಮನುಷ್ಯತ್ವವನ್ನು ಮರೆತು ಯಂತ್ರಗಳಾಗುತ್ತಿದ್ದೇವೆ
ತರಂಗಾಂತರಗಳ ಕಿರಣಗಳನ್ನು ನೋಡುತ್ತಾ ಇದೇ ಈ ಹೊತ್ತಿನ ತಲ್ಲಣ ಎಂದು ನಿಂತಿದ್ದೇವೆ
ಹಸಿದ ಮಗುವಿಗೆ ಊಟ ನೀಡಲು ತಾಯಿಗೆ ಸಮಯವಿಲ್ಲ
ವಯಸ್ಸು ಮೀರಿದ ಮನಸ್ಸುಗಳನ್ನು ಮಾತನಾಡಿಸಲು ಪುರುಸೊತ್ತಿಲ್ಲ
ಊರು ಕೇರಿಯವರ ಪರಿಚಯವಿಲ್ಲ , ಪ್ರಾಣಿ ಪಕ್ಷಿಗಳಂತೂ ನೆನಪೇ ಇಲ್ಲ
ಅಸ್ವಾಭಾವಿಕ ಸಮಾಜದ ಮಧ್ಯೆ ತಲ್ಲಣಿಸುತ್ತಿರುವವನಿಗೆ ಜೀವನದ ಕುರುಹೇ ಇಲ್ಲ
ದೇವಸ್ಥಾನಕ್ಕೆ ಹೋಗುವುದು "ಸೆಲ್ಫಿ" ಗಾಗಿ , ದರುಶನಕ್ಕಲ್ಲ
ಊಟ ಮಾಡುವುದು ಫೇಸ್ ಬುಕ್ ಗಾಗಿ , ಹೂಟ್ಟೆಪಾಡಿಗಲ್ಲ
ಸಾಧನೆ ,ಬೇರೆಯವರ ತೋರಿಕೆಗಾಗಿ ಆತ್ಮ ತೃಪ್ತಿಗಲ್ಲ
ಒಂದಲ್ಲ ಒಂದು ದಿನ ವಿದ್ಯುತ್ ಇರದಿದ್ದರೆ ? ಎಂಬ ತಲ್ಲಣ ಕಾಡುತ್ತಿದೆಯಲ್ಲ
ಕೈಯಲ್ಲಿ ದೂರವಾಣಿ , ಸ್ವಲ್ಪ ದೂರದಲ್ಲೇ ಗಣಕಯಂತ್ರವೊಂದು
ತೊಡೆಯಮೇಲೊಂದು , ಅಲ್ಲೇ ಬೆಂಚಿನ ಮೇಲೆ ಮತ್ತೊಂದು
ಕತ್ತಿನ ಸುತ್ತ ಹಾಡುವ ಯಂತ್ರ , ಕೈಯಲ್ಲಿ ಹೃದಯ ಬಡಿತ ತೋರಿಸುವ ಯಂತ್ರವೊಂದು
ನಮ್ಮ ಹೆಜ್ಜೆ ಹೆಜ್ಜೆಯನು ಯಾರೋ ದಾಖಲಿಸುತ್ತಿದ್ದಾರೆ ಎಂಬ ತಲ್ಲಣ ಮನದಲ್ಲಿಂದು
ಹಿಂದೊಮ್ಮೆ ಅಂದುಕೊಂಡಿದ್ದೆವು , ದೇವರಿದ್ದಾನೆ ಕಾಯುವವನು ಅವನೇ,
ನಿಯಂತ್ರಿಸುವವನು ಅವನೇ , ನಮ್ಮೆಲ್ಲ ಆಗುಹೋಗುಗಳ ಗಮನಿಸುವವನು ಅವನೇ
ಇಂದೀಗ ತಲ್ಲಣವಾಗುತ್ತಿದೆ ,ದೊಡ್ಡ ಕಂಪನಿಯ ಸಾಹುಕಾರರಿದ್ದಾರೆ
ಕಾಯುವವರು,ನಿಯಂತ್ರಿಸುವವರು ಅವರೇ ,ಆಗುಹೋಗುಗಳ ಗಮನಿಸುವವರು ಅವರೇ
ಒಂದು ದಿನ ಬರಬಹುದು , ಬೆಳಗೆದ್ದು ನೋಡಿದರೆ ಮರ ಗಿಡಗಳಿಲ್ಲ ,ಪ್ರಾಣಿ ಪಕ್ಷಿಗಳಿಲ್ಲ
ಸಂಬಂಧ ಸಹಚರರ ಸುಳಿವಿಲ್ಲ , ಭಾವನೆಗಳಿಲ್ಲ ಬಂದುಗಳಿಲ್ಲ ಯಂತ್ರ ಮಾನವರೇ ಎಲ್ಲ
ಯಾವುದೋ ಯಂತ್ರದ ಯಾವುದೋ ತಂತ್ರದ ಬಲಿಪಶುವಾಗಿ ತಲ್ಲಣಿಸುವೆವು ನಾವೆಲ್ಲಾ
ತಾವೇ ಸೃಷ್ಟಿಸಿದ ತರಂಗಗಳ ಆರ್ಭಟಕ್ಕೆ ಬಲಿಯಾಗಿ ಹೋಗುವುದು ಮನುಕುಲವೆಲ್ಲ
ಸ್ವಲ್ಪ ಸಡಲಿಸೋಣ ಯಂತ್ರಗಳ ಕೊಂಡಿಯನ್ನು
ಮತ್ತೆ ಮಗುವಂತೆ ಬೆರಗುಗಣ್ಣಲಿ ನೋಡೋಣ ಜೀವನವನ್ನು
ಸ್ವಾಭಾವಿಕವೇ ಸಂತಸ , ಸ್ವಾಭಾವಿಕವೇ ಶಾಶ್ವತವು
ತರಂಗಾಂತರಗಳ ಬಂಧನದ ಈ ಹೊತ್ತಿನ ತಲ್ಲಣವನು ಇಲ್ಲಿಯೇ ಅಂತ್ಯಗೊಳಿಸೋಣ
-LSS
Comments