ಒಂದು ಹಣ್ಣಿನ / ಹೆಣ್ಣಿನ ಕಥೆ !


ಸಿರಿವಂತನ ಮಗನ ಹಸಿವನ್ನು ನೀಗಿಸಿ 
ಉದರಾಗ್ನಿಯನ್ನು ಶಾಂತವಾಗಿಸಿತ್ತು ಆ  ಹಣ್ಣು/ಹೆಣ್ಣು  


ತನ್ನ ಹಸಿವು ನೀಗಿದ  ನಂತರ, ಅರ್ಧ ತಿಂದು ಮುಗಿಸಿದ ನಂತರ 
ರಸ್ತೆ ಬದಿಯಲ್ಲಿ ಬಿಸಾಡಿ ಹೊರಟ ಅವನು 


ಆ ಹಣ್ಣಿನ / ಹೆಣ್ಣಿನ ಒಡಲಲ್ಲಿತ್ತು ಪ್ರಪಂಚ ಕಾಣದ ಬೀಜ ಒಂದು 
ಹೊಸಕಿ ಹಾಕಲೇ ,ಬದುಕು ನೀಡಲೇ ಎಂಬ ಗೊಂದಲದಲ್ಲಿ ಜೀವ ಬಲಿತಾಗಿತ್ತು 


ಪ್ರಪ್ರಂಚವ ಕಾಣದ ಮುಗ್ಧ ಜೀವವನ್ನು ನೆನೆದು ,  
ಹೊಸ ಭವಿಷ್ಯವ ಹೊತ್ತ ಬದುಕನ್ನು ಸಾಯಿಸಲು ಮನಸ್ಸಾಗಲಿಲ್ಲ 


ಜೀವದ ಧ್ಯೇಯವೆಂಬಂತೆ , ಉಸಿರನ್ನು ಬಸಿದು 
ಫಲವತ್ತಾದ ಭೂಮಿಯನ್ನು ಕಂಡುಕೊಂಡಳು 


ನೆರೆಹೊರೆಯವರಿಗೆ ಹೆದರಲಿಲ್ಲ , ಬಿರುಗಾಳಿಗೆ ಬೆದರಲಿಲ್ಲ 
ಧೃಡ ಮನಸ್ಸಿನಿಂದ ಬೇರುಗಳ ಆಳಕ್ಕೆ ಚಾಚುತ್ತಾ ಪ್ರಪಂಚವ ತಿಳಿದಳು 


ತುಂತುರು ಮಳೆಯಿಂದ , ಸೂರ್ಯನ ಶಾಖದಿಂದ 
ಹಣ್ಣಿನ / ಹೆಣ್ಣಿನ ಧೃಡತೆಯಿಂದ ,ಕೊನೆಗೊಂದು ದಿನ ಜೀವ ಟಿಸಿಲೊಡೆದಿತ್ತು 


ನಿಷ್ಕಲ್ಮಶ ಬುದ್ದಿಯ , ಮುಗ್ಧ ಮನಸ್ಸಿನ 
ಹೊಸ ಜೀವವೊಂದು ಪ್ರಪಂಚದಲ್ಲಿ ಹುಟ್ಟಿತ್ತು 



                                                                        -LSS





Comments

Popular posts from this blog

ಆಟ!!!

ಜೀವನವೆಂಬ ಪಯಣದಲಿ, ನಾವೆಲ್ಲಾ ಒಟ್ಟಿಗೆ ಇದ್ದೀವಿ!

ಸ್ಯಾನ್ ಅಂಟೋನಿಯೋ