ಪುಟ್ಟಕ್ಕ ಮತ್ತು ಅಪ್ಪಯ್ಯ ...
ತಂದೆ ಮಗಳಿಬ್ಬರೂ ಸುದ್ದಿನೋಡುತ್ತಾ ಕುಳಿತರು,
ಸಾಲು ಸಾಲು ರೈತರ ಸಾವಿನ ಸುದ್ದಿ ,
ಊಹೆ ಇಲ್ಲದೆ ಪಡೆದ , ಹಿಂದಿರುಗಿಸಲಾರದ ಸಾಲದ ಸುದ್ದಿ
ಸತ್ತವರ ಸಂಖ್ಯೆ ನೂರು ದಾಟಿದರು , ಏನೂ ಮಾಡದ ಸರ್ಕಾರದ ಸುದ್ದಿ
ಪುಟ್ಟಕ್ಕ ಟೀವಿ ಆರಿಸುತ್ತ ಹೇಳಿದಳು
ಇವರಿಗೆಲ್ಲ ಬುದ್ದಿಯಿಲ್ಲವೇನು ?
ಒಮ್ಮೆ ನಷ್ಟ ವಾದರೆ , ಮತ್ತೊಂದು ಬೆಳೆಯುಂಟು ,
ಒಂದು ಸಾಲ ತೀರಿಸಲು ಮತ್ತೊಂದು ಮಾಡಿದರಾಯಿತು
ಅಪ್ಪಯ್ಯ ಅಸಹಾಯಕತೆಯಿಂದ ಹೇಳಿದರು ,
ಸಮಸ್ಯೆ ಇಷ್ಟು ಸಣ್ಣದಿದ್ದರೆ, ನೂರು ಮಂದಿ ಸಾಯುತ್ತಿರಲಿಲ್ಲ
ಊಹೆಗೆ ಮೀರಿದ ಸಾಲವ ಪಡೆದಿರುವೆನು ,
ಜೀವ ಪೂರ್ತಿ ಜೀತ ಮಾಡಿದರು ಸಾಲ ತೀರಿಸಲಾರೆನು
ಬದುಕಿದ್ದರೆ ಇರುವ ಒಂದು ಜಮೀನನ್ನು ಒತ್ತುವರಿ ಮಾಡುವರು
ನಾ ಸತ್ತರೆ ಬಹುಷಃ ಸಾಲ ಮನ್ನ ಮಾಡುವರು
ಬೆಳೆದ ಬೆಳೆ ನನ್ನ ಪಾಲಿಗೆ ವಿಷವಾಯಿತು ,
ನಂಬಿದ್ದ ದಣಿಗಳು ಎದುರಾಳಿಯಾದರು
ಇನ್ನು ದುಡಿಯಲು ನಾ ಅಶಕ್ತನಾಗಿರುವೆನು ,
ಜೀವನದ ಆಸೆ ಪೂರ್ತಿ ಕಳೆದುಕೊಂಡಿರುವೆನು
ಪುಟ್ಟಕ್ಕನಿಗೆ ಭಯ ಶುರುವಾಯಿತು ,
ತನ್ನ ಮನೆಯ , ತನ್ನ ತಂದೆಯ ಸ್ಥಿತಿ ಅರಿವಾಯಿತು
ಅಪ್ಪಯ್ಯನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು
ನನ್ನ ಬಿಟ್ಟು ಹೋಗಬೇಡ ಎಂದು ಅತ್ತು ಗೋಳಾಡಿದಳು
ಆತ್ಮಹತ್ಯೆಯ ಬಿಟ್ಟು ಬೇರೆ ದಾರಿಯಿಲ್ಲ ನನಗೆ ಎನ್ನುತ್ತಾ ,ಅಪ್ಪಯ್ಯ ,
ಮನೆಯ ಮಾಳಿಗೆಗೆ ಹಗ್ಗ ಬಿಗಿದರು ....
-LSS
Nice thought. good one
ReplyDelete